Eddelu bharathiya - ಎದ್ದೇಳು ಭಾರತೀಯ
Product details
ಎದ್ದೇಳು ಭಾರತೀಯ
ಭಾರತವು 800 ವರ್ಷಗಳ ಇಸ್ಲಾಮೀ ವಸಾಹತು ಹಾಗೂ 200 ವರ್ಷಗಳ ಕ್ರೆöÊಸ್ತ ವಸಾಹತು ದಾಳಿಗೆ ಒಳಗಾಯಿತು. ನಂತರದ ದಿನಗಳಲ್ಲಿ ಕಮ್ಯುನಿಸಮ್, ಸೋಷಲಿಸಮ್ನಂಥ ಹಲವು ಇಸಮ್ಗಳ ಪ್ರಯೋಗಶಾಲೆಯಾಯಿತು. ಈಗಂತೂ ವೋಕ್ ಮುಂತಾದ ವಿಭಜಕ ಸಿದ್ಧಾಂತಗಳು ಭಾರತವನ್ನು ತಮ್ಮ ಪ್ರಯೋಗಶಾಲೆಯಾಗಿ ಮಾಡಿಕೊಳ್ಳಲು ಹವಣಿಸುತ್ತಿವೆ. ಭಾರತದ ದುಸ್ಥಿತಿಗೆ ಒಂದು ಬದಿಯಿಂದ ಈ ಎಲ್ಲ ಹೊರಗಿನ ಬೌದ್ಧಿಕ, ರಾಜಕೀಯ ಆಕ್ರಮಣಗಳು ಕಾರಣವಾದರೂ ಇನ್ನೊಂದು ಬದಿಯಿಂದ ನಿದ್ರಿತಾವಸ್ಥೆಯಲ್ಲಿದ್ದ ಭಾರತೀಯರೂ ಕಾರಣವೆಂಬುದನ್ನು ಒಪ್ಪಲೇಬೇಕು. ನಿದ್ರಾವಸ್ಥೆಯಲ್ಲಿರುವ ಭಾರತೀಯರನ್ನು ಎಚ್ಚರಗೊಳಿಸಿ ಅವರಲ್ಲಿ ಕ್ಷಾತ್ರ ತುಂಬುವ ಕೆಲಸವನ್ನು ಶ್ರೀ ಅರವಿಂದರು, ಸ್ವಾಮಿ ವಿವೇಕಾನಂದರು, ದಯಾನಂದ ಸರಸ್ವತಿ ಮುಂತಾದವರಿಂದ ಮೊದಲ್ಗೊಂಡು ಸೀತಾರಾಮ್ ಗೋಯಲ್, ಕಾನ್ರಾಟ್ ಎಲ್ಟ್ಸ್ ವರೆಗಿನ ಹಲವರು ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲ ಆಕ್ರಮಣ ಮತ್ತು ಪ್ರತಿರೋಧಗಳ ಸಂಕ್ಷಿಪ್ತ ಇತಿಹಾಸವನ್ನು ಮುಂದಿಟ್ಟು, ಭಾರತೀಯನನ್ನು ಮುಂದಿನ ಬೌದ್ಧಿಕ ಯುದ್ಧಕ್ಕೆ ಅಣಿಗೊಳಿಸುವ ಕೆಲಸವನ್ನು ಮಾಡುವ ಪುಟ್ಟ ಕೃತಿಯೇ ಪ್ರಖರ ಚಿಂತಕರಾದ ಡಾ. ಜಿ. ಬಿ. ಹರೀಶರ “ಎದ್ದೇಳು ಭಾರತೀಯ”.